ಎಳೆಯರ ಮುಖವರ್ಣಿಕೆ
ಲೇಖಕರು : ಕೆ. ದಿನಮಣಿ ಶಾಸ್ತ್ರೀ
ಶುಕ್ರವಾರ, ಜೂನ್ 5 , 2015
|
ಜೂನ್ 5, 2015
|
ಎಳೆಯರ ಮುಖವರ್ಣಿಕೆ
ಬೆ೦ಗಳೂರು :
ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಸಂಸ್ಥೆಯು ರಂಗಸಂಪದ, ಕೋಟ, ಕಲಾಪೀಠ, ಕೋಟ, ದಾಸ ಯಕ್ಷಗಾನ ಚಾರಿಟೆಬಲ್ ಟ್ರಸ್ಟ್ , ಮರವಂತೆ ಮತ್ತು ಮಕ್ಕಳ ಮೇಳ- ಸಾಲಿಗ್ರಾಮ ಇವರ ಸಹಕಾರದಿಂದ ಯಕ್ಷಗಾನ ನೃತ್ಯ, ವಸ್ತ್ರಾಲಂಕಾರ ಮತ್ತು ಮುಖವರ್ಣಿಕೆ ಕಾರ್ಯಾಗಾರವನ್ನು ಕೋಟ ಹಂದೆ ದೇವಸ್ಥಾನದಲ್ಲಿ ನಡೆಸಿತು.
ಯಕ್ಷಗಾನ ನೃತ್ಯಾಭ್ಯಾಸಕ್ಕೆ ಮೊದಲು ಪ್ರಾಥಮಿಕ ಅಂಗಸಾಧನೆ ಮತ್ತು ವ್ಯಾಯಾಮ ಗಳನ್ನು ಮಾಡಿಸುತ್ತ ತಾಳ ಪರಿಚಯ ಮತ್ತು ಹೆಜ್ಜೆಗಳನ್ನು ಹೇಳಿಕೊಡಲಾಯಿತು. ಮುಂದೆ ಪೂರ್ವರಂಗದ ತುಣುಕುಗಳೊಂದಿಗೆ ಇತರ ನೃತ್ಯಗಳ ಅಭ್ಯಾಸ ಮಾಡಿಸಲಾಯಿತು. ಆಯಾಯ ವೇಷಗಳಿಗೆ ತಕ್ಕ ವಸ್ತ್ರಾಲಂಕಾರ, ಅಟ್ಟೆ ಕೇದಗೆ ಮುಂದಲೆ ಕಟ್ಟುವುದು, ವಿವಿಧ ಆಭರಣಗಳನ್ನು ತೊಡುವ ಕ್ರಮ ಮತ್ತು ಮುಖವರ್ಣಿಕೆಯ ಕ್ರಮಗಳನ್ನು ಪ್ರಾಯೋಗಿಕವಾಗಿ ಮಾಡಿಸಲಾಯಿತು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷ್ಣಮೂರ್ತಿ ಉರಾಳ, ಸುದರ್ಶನ ಉರಾಳ, ನರಸಿಂಹ ತುಂಗ, ಸುಜಯೀಂದ್ರ ಹಂದೆ, ನವೀನ್ ಕೋಟ; ಭಾಗವತರಾಗಿ ದೇವರಾಜ ದಾಸ್ ಮತ್ತು ಮದ್ದಲೆಯಲ್ಲಿ ಮಾಧವ ಮಣೂರು ಸಹಕರಿಸಿದ್ದರು. ಶಿಬಿರದಲ್ಲಿ ಯಕ್ಷಗಾನದ ಪ್ರಾಥಮಿಕ ಮಾಹಿತಿ ಪಡೆದ ಈ ಎಳೆಯರು ಇನ್ನಷ್ಟು ವಿಚಾರಗಳನ್ನರಿತು ಮುಂಬರುವ ದಿನಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಬೆಳಗಲಿ.
ಕೃಪೆ :
http://udayavani.com
|
|
|